ಕನ್ನಡವು ಕನ್ನಡವ ಕನ್ನಡಿಸುತಿರಲಿ: ರಾಜ್ಯೋತ್ಸವದ ಓದು ನಿಮ್ಮ ಮಗುವಿಗಾಗಿ!

Posted by Remya Padmadas on November 01, 2019

Written by Hema, Editor- Kannada, Pratham Books

Who says math formulas are boring? Do you know how to recite a math concept through a wonderful story? Do you remember some funny things when your first teeth fell off? Have you ever witnessed a sunshower song? Who is Ahilyabai Holkar? On Kannada Rajyotsava, here are some amazing stories for you and your children. Read on to know more… 

ಆಡಾಡಿಕೊಂಡು ಕಲಿ, ಕೇಳು ಕೇಳುತ್ತಲೇ ತಿಳಿ 

1. Pishi and me - ನಾನು, ನನ್ನತ್ತೆ (Level 2)

https://storyweaver.org.in/stories/44731-naanu-nannatte

ಆಹ್, ಅತ್ತೆ ಎಷ್ಟು ಚೆಂದ. ನಾನು ಚಿಕ್ಕವಳಿದ್ದಾಗ ನನ್ನ ಚಿಕ್ಕತ್ತೆ ಹೈಸ್ಕೂಲಿನಲ್ಲಿ ಓದುತ್ತಿದ್ದರು. ನನ್ನ ಬಾಲ್ಯದ ನೆನಪುಗಳಲ್ಲಿ  ನನಗೆ ತುಂಬಾ ನೆನೆಪಿರುವ ಸಂಗತಿಗಳು ಎಂದರೆ ಅತ್ತೆಯ ಜೊತೆ ಊರಿನ ಬೀದಿಗಳಲ್ಲಿ ತಿರುಗಿದ್ದು ಮತ್ತು ಬೇರೆ ಬೇರೆ ಜನರನ್ನು ಭೇಟಿಯಾಗಿದ್ದು.  

ನಾನು, ನನ್ನತ್ತೆ ಕತೆಯ ಒಂದು ಚಿತ್ರ

ನನ್ನ ಸ್ನಾತಕೋತ್ತರ ಪದವಿ ಮುಗಿಯುತ್ತಿದ್ದಂತೆ ನಾನು ಅತ್ತೆಯಾದೆ ಅಂದರೆ ಅಣ್ಣನಿಗೆ ಮಗುವಾಯಿತು. ನನಗೇ ಇನ್ನೂ ಅತ್ತೆಯ ಜೊತೆಗಿನ ನೆನಪುಗಳು ನಿನ್ನೆ ಮೊನ್ನೆ ಎನ್ನುವ ಹಾಗಿದ್ದಾಗ ನಾನು ಅತ್ತೆಯಾಗಿದ್ದೆ. ಎಷ್ಚು ಚೆಂದದ ಭಾವ. ಅಣ್ಣನ ಮಗಳು ನನ್ನ ಜೊತೆ ಬರುವಾಗಲೆಲ್ಲ, ನಾನು ಅತ್ತೆಯ ಜೊತೆ ಹೋಗುವಾಗ ಮಾಡುತ್ತಿದ್ದ ಕೀಟಲೆಗಳನ್ನೇ ಮಾಡುತ್ತಿದ್ದಳು.   ಇಡೀ ಕಥೆ ಮೂರು ತಲೆಮಾರುಗಳನ್ನು ಪ್ರತಿನಿಧಿಸುತ್ತದೆ ಎನ್ನುವುದೇ ನನಗೆ ಸೋಜಿಗ ಮೂಡಿಸುತ್ತದೆ. ಅದಕ್ಕಾಗಿ ನಾವು ಮೂವರೂ ‘ನಾನು, ನನ್ನತ್ತೆ’ ಕಥೆಯನ್ನು ಪದೇ ಪದೇ ಓದುತ್ತೇವೆ. 

2. The Very Wiggly Tooth - ನಿಲ್ಲದ, ಬೀಳದ ಈ ಹಲ್ಲು! (Level 2)

https://storyweaver.org.in/stories/27656-nillada-beelada-ee-hallu

ಮನುಷ್ಯನಿಗೆ ಎರಡು ಹಂತದಲ್ಲಿ ಹಲ್ಲುಗಳು ಬರುತ್ತವೆ. ಮೊದಲನೆಯದು, ಎಳೆ ಹಲ್ಲು (ಹಾಲು ಹಲ್ಲು ಅಂತಾರೆ). ಇದು ಮಗುವಿನಲ್ಲಿ ಶುರುವಾಗಿ ಏಳೆಂಟು ವರ್ಷಗಳ ಹೊತ್ತಿಗೆ ಬಿದ್ದು ಹೋಗುತ್ತವೆ. ಹೀಗೆ ಬಿದ್ದ ಹಲ್ಲಿನ ಜಾಗದಲ್ಲಿ ಮೂಡುವ ಹಲ್ಲುಗಳನ್ನು ಶಾಶ್ವತ ಹಲ್ಲುಗಳೆನ್ನುತ್ತಾರೆ ಎನ್ನುತ್ತದೆ ವಿಜ್ಞಾನ. 

ಮಕ್ಕಳಿಗೆ ಮೊದಲು ಮೂಡುವುದು ಮುಂದಿನ ಮೇಲಿನ ಅಥವಾ ಕೆಳಗಿನ ಎರಡು ಹಲ್ಲುಗಳು. ಆ ಹಲ್ಲುಗಳೇ ಮಕ್ಕಳ ಮೊದಲ ಆಯುಧಗಳು ಎಂದರೂ ಅಡ್ಡಿಯಿಲ್ಲ. ಸ್ವಲ್ಪ ಚಂಡಿ ಹಿಡಿಯುವ ಮಕ್ಕಳಾದರೆ ಅವರ ಮೊದಲ ಕೆಲಸ ಸಿಕ್ಕಿದ್ದನ್ನೆಲ್ಲ ಕಚ್ಚುವುದು. ಹಾಲು ಹಲ್ಲುಗಳು ಬರುವುದು ನಿಂತ ಸ್ವಲ್ಪ ತಿಂಗಳುಗಳಿಗೆ ಅವು ಬೀಳುವ ಸುಗ್ಗಿ ಕೇಳಬೇಕೆ? ಪ್ರತಿ ಮಕ್ಕಳ ಹಾಲು ಹಲ್ಲು ಬೀಳುವುದು ಒಂದೊಂದು ಕಥೆ. ಅಂಥದ್ದೇ ಒಂದು ಕಥೆ ಇಲ್ಲಿ ಓದಲು ಸಿಗುತ್ತದೆ.

3. The Sunshower Song - ಬಿಸಿಲು ಮಳೆಯ ಹಾಡು (Level 3)

https://storyweaver.org.in/stories/41509-bisilu-maleya-haadu

ಜನರ ಮದುವೆಗಳಲ್ಲಿ ಆರ್ಕೆಸ್ಟ್ರಾ ನಡೆಸುವುದು ಸಾಮಾನ್ಯ ಸಂಗತಿ. ಅದೇ ರೀತಿ ಪ್ರಾಣಿಗಳ ಮದುವೆಯಲ್ಲೂ ಒಂದು ಸಂಗೀತ ಕಛೇರಿ ನಡೆಯುತ್ತದೆ. ಅದು ನರಿ ಜೋಡಿ ಮದುವೆ. ಆ ಮದುವೆಯಲ್ಲಿ ಸಂಗೀತದ ಮೋಡಿ. ಉಡುಗೊರೆ ಬದಲಿಗೆ ಅತಿಥಿಗಳೆಲ್ಲ ಶಬ್ದದ ಒಂದೊಂದು ತುಣುಕಿನೊಂದಿಗೆ ಮದುವೆಗೆ ಬರುತ್ತಾರೆ ಎನ್ನುವುದು ಎಷ್ಟು ಸುಂದರವಾದ ಕಲ್ಪನೆ. ಕೆಲವರು ತಾಳ, ಕೆಲವರು ಸ್ವರ ತರುವುದರ ಮೂಲಕ ಮದುವೆ ಭಾವಗೀತೆಯ ಮೇಳವಾಗುತ್ತದೆ. 

ಅಪ್ಪ ಅಮ್ಮನ ಮದುವೆಯ ಬಗ್ಗೆ ತಿಳಿದುಕೊಳ್ಳುವುದು ಬಹುತೇಕ ಮಕ್ಕಳಿಗೆ ಬಲು ಮೋಜಿನ ಸಂಗತಿ. ಮಕ್ಕಳಲ್ಲಿ ಇರುವಂತಹ ಕುತೂಹಲವೇ ಪ್ರಾಣಿಗಳಲ್ಲೂ ಇದೆ ಎನ್ನುವ ಯೋಚನೆಯೇ ಖುಷಿ ಕೊಡುವ ಸಂಗತಿ. ಮಳೆಗಾಲದ ಒಂದು ದಿನ ಸೂರ್ಯ ಇಣುಕಿದರೆ, ಸದ್ಯದಲ್ಲೇ ಏನಾಗಲಿದೆ ಎಂದು ಕಾಡಿನ ಪ್ರಾಣಿಗಳಿಗೆ ತಿಳಿಯುತ್ತದೆ. ಆದರೆ ಈ ಬಿಸಿಲು ಮಳೆಯ ಹಾಡಿನ ಜನಪ್ರಿಯ ದಂತಕತೆ ಸೃಷ್ಟಿಯಾಗಿದ್ದು ಹೇಗೆ ಅಂತ ನಿಮಗೇನಾದರೂ ಗೊತ್ತಾ?

4. Neelumbera on a Full Moon Night - ಬೆಳದಿಂಗಳ ಹೂ ನೀಲಂಬರ (Level 3)

https://storyweaver.org.in/stories/39012-beladingala-hoo-neelambara

ದಿನ ಮಾಡುವ ಕೆಲಸಗಳಿಂದಲೇ ಗಣಿತ ಕಲಿಯುವುದು. ಬೆಳೆಯುವ, ಕರಗುವ ಚಂದ್ರನನ್ನು ಗಮನಿಸುತ್ತ ಗಣಿತ ಮತ್ತು ಲ.ಸಾ.ಅ, ಮ.ಸಾ.ಅ ಕಲಿಯುವುದು ಎಷ್ಟು ಮೋಜಿನ ಕಲಿಕೆಯಲ್ಲವೇ? ಎಲ್ಲ ತರಗತಿಗಳಲ್ಲೂ ಗಣಿತ ಕಬ್ಬಿಣದ ಕಡಲೆ ಎಂದು ಅರಿವಾದಗಲೆಲ್ಲ ನಾನು ಅಂದುಕೊಂಡಿದ್ದು ಚಿತ್ರ ಮತ್ತು ಕತೆಯ ಮೂಲಕ ಗಣಿತ ಕಲಿಯುವುದಾದರೆ ಎಷ್ಟು ಚೆಂದ ಎಂತಲೇ. ಅದಕ್ಕೆ ಪೂರಕ ಎನ್ನುವಂತೆ ಬಂದ ಈ ಕತೆಯನ್ನು ಹಲವು ಸಲ ಗಣಿತದ ಮೋಜಿಗಾಗಿ ಓದಿದ್ದರೆ, ಹಲವು ಸಲ ಚಿತ್ರ ನೋಡುವುದಕ್ಕಾಗಿ ಓದಿದ್ದೇನೆ. 

ಬೆಳದಿಂಗಳ ಹೂ ನೀಲಂಬರ ಕತೆಯ ಒಂದು ಚಿತ್ರ

5. Ahilyabai Holkar - ಅಹಿಲ್ಯಾಬಾಯಿ ಹೋಳ್ಕರ್ (Level 4)

https://storyweaver.org.in/stories/29624-ahilyabai-holkar

ಭಾರತದ ಇತಿಹಾಸದಲ್ಲಿ ನಾವು ಕೇಳುವ ಬಹು ಮುಖ್ಯವಾದ ಹೆಣ್ಣುಮಕ್ಕಳ ಹೆಸರೆಂದರೆ, ಝಾನ್ಸಿಯ ರಾಣಿ ಲಕ್ಷ್ಮೀ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮ. ಇಷ್ಟೇ ಪ್ರಮುಖವಾದ ಇನ್ನೊಂದು ಹೆಸರಿದೆ ಎಂದು ಗೊತ್ತಾಗುವುದು ಅಹಿಲ್ಯಾಬಾಯಿ ಹೋಳ್ಕರ್ ಕಥೆಯಿಂದ. ಅಖಂಡ 28 ವರ್ಷ ಅಹಿಲ್ಯಾಬಾಯಿ ಹೋಳ್ಕರ್ ಮಾಳ್ವ ರಾಜ್ಯವನ್ನು ಆಳಿದ ಕಾಲ ಇತಿಹಾಸದಲ್ಲಿ ಅಜರಾಮರವಾಗಿದೆ. ಅವಳ ಪ್ರಜಾಪ್ರೀತಿ ಇವತ್ತಿಗೂ ಅನುಕರಣೀಯ.
ಅವಳು ತನ್ನ ಪ್ರಜೆಗಳನ್ನು ಎಷ್ಟು ಚೆನ್ನಾಗಿ ನೋಡಿಕೊಂಡಿದ್ದಳೆಂದರೆ ಆಕೆಯನ್ನು ಪುಣ್ಯಶ್ಲೋಕ ಅಹಿಲ್ಯಾಬಾಯಿ ಎಂದು ಕರೆಯುತ್ತಿದ್ದರು. ಅಂದರೆ, ಯಾವುದೇ ಲೋಪಗಳಿಲ್ಲದವಳು ಎಂದು ಅರ್ಥ. ತಮ್ಮ ‘ಡಿಸ್ಕವರಿ ಆಫ್ ಇಂಡಿಯ’ ಪುಸ್ತಕದಲ್ಲಿ ಪಂಡಿತ್ ಜವಹರ್‌ಲಾಲ್ ನೆಹರು ಅವರು, “ಅಹಿಲ್ಯಾಬಾಯಿಯ ರಾಜ್ಯಾಡಳಿತ ಕಾಲವು ಪ್ರಜೆಗಳಿಗೆ ಅತ್ಯಂತ ಸುಭಿಕ್ಷಾ ಕಾಲವಾಗಿತ್ತು. ಅಹಿಲ್ಯಾಬಾಯಿ ಅತ್ಯಂತ ದಕ್ಷ ಮತ್ತು ಸಮರ್ಥ ನಾಯಕಿ, ಸಂಘಟನಾ ಚತುರೆ ಆಗಿದ್ದಷ್ಟೇ ಅಲ್ಲದೇ ಅವಳ ಮರಣಾ ನಂತರ ಜನರು ಅವಳೊಬ್ಬ ದೇವತೆ ಎಂತಲೂ ಗೌರವಿಸತೊಡಗಿದರು,” ಎಂದು ಬರೆದಿದ್ದಾರೆ.


Do join the conversation by leaving your thoughts in the comments section below. You can also reach out to us through our social media channels: FacebookTwitter and Instagram.



0 Comments