September 30th is celebrated around the world as International Translation Day. We're very fortunate that some of our wonderful translators and language reviewers shared their thoughts on translation and children's books with us on this occasion.

Picture2.png

A techie turned movie buff, Girish N.R's interests vary from Theatre to Environment, Education to Tourism and writing. He is a passionate supporter of Creative Commons. His views in this article gives a gist on renowned Kannada authors like Shivaram Karanth and Poornachandra Tejaswi’s attempts of writing for children.

ತೇಜಸ್ವಿ ಮತ್ತು ಕಾರಂತರ ನೆಪದಲ್ಲಿ ...  

ಬರಹ: ಗಿರೀಶ್ ಎನ್.ಆರ್.

ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಬಹಳಷ್ಟು ಪುಸ್ತಕದ ಆರಂಭದಲ್ಲಿ,  ಲೋಹಿಯಾ ಅವರ ತತ್ತ್ವಚಿಂತನೆ, ಕುವೆಂಪು ಅವರ ಕಲಾ ಸೃಷ್ಟಿ ಮತ್ತು ಶಿವರಾಮ ಕಾರಂತರ  ಜೀವನ ದೃಷ್ಟಿ- ಇವುಗಳ ಬಗ್ಗೆ ಉಲ್ಲೇಖಿಸುತ್ತಾರೆ.  ಇಲ್ಲಿ ತತ್ತ್ವಚಿಂತನೆ, ಕಲಾ ಸೃಷ್ಟಿ ಮತ್ತು ಜೀವನ ದೃಷ್ಟಿ  ಎಂಬ ಪದಗಳ ಆಯ್ಕೆಯೇ ಅದ್ಭುತವಾಗಿದೆ. ತೇಜಸ್ವಿ ಕೂಡ ಈ ಮೂರೂ  ಅಂಶಗಳಲ್ಲಿ ಉನ್ನತಿ ಹೊಂದಲು ಪರಿ ಶ್ರಮಿಸದವರೇ. ಪ್ರಾಯಶಃ ಇದರ ಫಲವಾಗಿಯೇ ಕಾರಂತರು ಮತ್ತು ತೇಜಸ್ವಿ,  ಮಕ್ಕಳ ಜ್ಞಾನದ ತೃಷೆಯನ್ನು ಹೆಚ್ಚಿಸಬಲ್ಲ ಆಸಕ್ತಿ ದಾಯಕ ವಿಷಯಗಳ ಹೊತ್ತ ಕನ್ನಡ ಪುಸ್ತಕಗಳನ್ನು ಹೊರತರುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಶಿವರಾಮ ಕಾರಂತರ "ಬಾಲ ಪ್ರಪಂಚ" ಮತ್ತು ತೇಜಸ್ವಿ ಅವರ "ಮಿಲೆನಿಯಮ್  ಸರಣಿಯ" ಪುಸ್ತಕಗಳನ್ನು ನೆಪವಾಗಿ ಇಟ್ಟುಕೊಂಡು ನಾನಿಲ್ಲಿ ಒಂದೆರೆಡು ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವ ಪ್ರಯತ್ನ ಮಾಡಿದ್ದೇನೆ .

ಶಿವರಾಮ ಕಾರಂತರ  "ಬಾಲ ಪ್ರಪಂಚ" ಮಕ್ಕಳ ವಿಶ್ವಕೋಶದಂತಹ (encyclopedia) ಬೃಹತ್ ಕೆಲಸವನ್ನು ಕನ್ನಡದಲ್ಲಿ ಕೈಗೆತ್ತಿಕೊಂಡ ಮೊದಲ ಪ್ರಯತ್ನ ಇರಬಹದು. (ಮತ್ತು ಕೊನೆ ಪ್ರಯತ್ನ ಕೂಡ ಇರಬಹುದು. ನಾನು ಇತಿಹಾಸಕಾರನಲ್ಲ).  ಇಂತಹ ಕೆಲಸಕ್ಕೆ ಅವರಿಗಾದ  ಆರ್ಥಿಕ ಮುಂಗಟ್ಟಿನ ಕಥೆ ವ್ಯಥೆಗಳು ನಮ್ಮ ಊಹೆಯನ್ನೂ ಮೀರಿದವು. ಆದರೂ ಅವರನ್ನ ಈ ಕೆಲಸದಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುತ್ತಿದ್ದುದೇನು?  ಮಕ್ಕಳ ಮನಸ್ಸಿನ ಹಸಿವನ್ನು ಹೆಚ್ಚಿಸುವ ಮತ್ತು ಮನಸ್ಸನ್ನು ಅರಳಿಸುವ ಪುಸ್ತಕಗಳು ಕನ್ನಡದಲ್ಲೇ ಇರಬೇಕು ಎಂಬುದರ ಬಗ್ಗೆ ಅವರಿಗಿದ್ದ ಪ್ರೀತಿ . ದೇಶದ  ಉದ್ದಗಲವೂ ಪ್ರಯಾಣಿಸಿದ್ದ ಅವರು ಮತ್ತು ದೇಶದ ಬಹುಸಂಖ್ಯಾತ ಮಕ್ಕಳ ಶಿಕ್ಷಣದ ರೀತಿ ನೀತಿಗಳನ್ನ ಅರಿತಿದ್ದ ಅವರು ಮಾತೃಭಾಷೆಯಲ್ಲಿ ವಿಶ್ವಕೋಶದಂತಹ ಪುಸ್ತಕ ತರವುದರ ಅವಶ್ಯಕತೆ ತಿಳಿದಿದ್ದರು. ಕೇವಲ ಮಾತೃ ಭಾಷೆಯಲ್ಲಿ ಬರೆಯುವುದಲ್ಲದೆ ಅದು ಮಕ್ಕಳಿಗೆ ಅನುಕೂಲವಾಗುವಂತೆ ಸರಳವಾಗಿ ಮತ್ತು ಸುಂದರವಾಗಿ ಇರುವಂತೆ ಕೂಡ ಅವರು ಜಾಗ್ರತೆವಹಿಸಿದ್ದಾರೆ. ವಿಶ್ವಕೋಶ ಎಂದಾದ ಮೇಲೆ ವಿಷಯಗಳಿಗೂ ಕೊರತೆಯಿಲ್ಲ . ಅಲ್ಲೂ ಕಾರಂತರು ತೋರಿರುವ ವೈವಿಧ್ಯತೆ ಮತ್ತು ಅಚ್ಚರಿಯ ವಿಷಯಗಳನ್ನು ಮಕ್ಕಳಿಗೆ ತಿಳಿಸಿ ಅವರನ್ನ ಉತ್ತೇಜಿಸ ಬೇಕು ಎಂಬ ಪ್ರಾಮಾಣಿಕತೆ  ಮತ್ತು ಪ್ರೀತಿ "ಬಾಲ ಪ್ರಪಂಚ"ದಲ್ಲಿ ಎದ್ದು ಕಾಣುತ್ತದೆ.

"ಬಾಲ ಪ್ರಪಂಚ" ವಿಶ್ವಕೋಶ ಎಂಬ ಹಣೆಪಟ್ಟಿಯಲ್ಲಿ ಒಂದು ಮಟ್ಟಿಗೆ ಮಾಹಿತಿಯ ಪುಸ್ತಕವಾಗಿ ನಿಲ್ಲುತ್ತದೆ. ಕನ್ನಡದ ಮಟ್ಟಿಗೆ  ಮೊದಲ ಪ್ರಯತ್ನವಾದ (ನಾನು ಇತಿಹಾಸಕಾರನಲ್ಲ) ಇದು ಪುಸ್ತಕದ ಹಿಂದಿನ ಉದ್ದೇಶವನ್ನು ಪೂರ್ಣಗೊಳಿಸುತ್ತದೆ ಕೂಡ.

ತೇಜಸ್ವಿ ಅವರ "ಮಿಲನಿಯಮ್ ಸರಣಿ" ಒಂದು ಮಟ್ಟಿಗೆ "ಬಾಲ ಪ್ರಪಂಚ"ದ ವಿಸ್ತರಣೆ ಎನ್ನಬಹುದು ಕೂಡ. ತೇಜಸ್ವಿ ಅವರು ಇದ್ದಿದ್ದರೆ ನನ್ನ ಈ ಮಾತು ನಿಜ  ಎನ್ನುವಷ್ಟರ ಮಟ್ಟಿಗೆ  "ಮಿಲನಿಯಮ್ ಸರಣಿ" ಬೃಹದಾಕಾರವಾಗಿ ಬೆಳೆಯುತ್ತಿತ್ತೇನೋ? ಅದೇನೇ ಇರಲಿ, "ಮಿಲನಿಯಮ್ ಸರಣಿ" ಹೊರ ಬರಲು ಕೂಡ ತೇಜಸ್ವಿ ಮತ್ತು ಕಾರಂತರಲ್ಲಿ ಇದ್ದ  ತತ್ವಚಿಂತನೆ, ಕಲಾ ಸೃಷ್ಟಿ ಮತ್ತು ಜೀವನ ದೃಷ್ಟಿ ಸಾಮ್ಯತೆಯೇ ಕಾರಣ. ಮಕ್ಕಳಿಗೆ ಸಿಗುತ್ತಿರುವ ಜಡ ಶಿಕ್ಷಣದ ಕುರಿತು ತೇಜಸ್ವಿ ಅವರ ಅತೃಪ್ತಿ ಅವರ ಬರಹಗಳಲ್ಲಿ   ಗಟ್ಟಿಯಾಗಿಯೇ ವ್ಯಕ್ತವಾಗಿದೆ. ಹಳ್ಳಿಯ ವಾತಾವರಣದಲ್ಲಿಯೇ ತಮ್ಮ ಬದುಕನ್ನು ರೂಪಿಸಿಕೊಂಡ ತೇಜಸ್ವಿ ಅವರು ಆಧುನಿಕತೆ , ಬದಲಾಗುತ್ತಿರುವ ಜ್ಞಾನವ್ಯವಸ್ಥೆ ಮತ್ತು ಶಿಕ್ಷಣದ ರೀತಿ ನೀತಿ, ಆಧುನಿಕ ಭಾರತದ ಆರ್ಥಿಕ  ಮತ್ತು ಸಾಮಾಜಿಕ ವೈರುದ್ಧ್ಯ , ಇವ್ವೆಲವನ್ನ ಹತ್ತಿರದಿಂದ ವಿಶ್ಲೇಷಿಸಿದ್ದರು. ಈ ಹಿನ್ನೆಲೆಯಿಂದಲೇ ಅವರು "ಮಿಲನಿಯಮ್ ಸರಣಿ" ಕೆಲಸದಲ್ಲಿ ತೊಡಗಿಸಿಕೊಂಡರು. "ಮಿಲನಿಯಮ್ ಸರಣಿ" "ಬಾಲ ಪ್ರಪಂಚ"ದ ವಿಸ್ತರಣೆ ಎಂದು ನಾನು ಹೇಳುವಾಗ ವಿಷಯಗಳನ್ನು ಹೇಳುವಲ್ಲಿ "ಮಿಲನಿಯಮ್ ಸರಣಿ"ಯಲ್ಲಾದ ಉತ್ತಮ ಬೆಳವಣಿಗೆ ಕೂಡ ನನ್ನ ಮನಸ್ಸಿನಲ್ಲಿತ್ತು . ನನ್ನ ಪ್ರಕಾರ "ಮಿಲನಿಯಮ್ ಸರಣಿ" ವಿಷಯಗಳನ್ನು ಹೇಳುವ ತಂತ್ರಗಾರಿಕೆ ಮತ್ತು ಭಾಷೆ ಎರಡರಲ್ಲೂ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಈ ಉತ್ತಮ ಬೆಳವಣಿಗೆಗೆ ಕಾರಣವೇ ತೇಜಸ್ವಿ ಅವರಿಲ್ಲಿದ್ದ ತುಡಿತ ಮತ್ತು ಪ್ರೀತಿ.

ಈ ಎರಡೂ ಪುಸ್ತಕಗಳ ಪುಟಗಳನ್ನ ಮತ್ತೆ ತಿರುಗಿಸುವಂತೆ ಮಾಡಿದ್ದು ನನ್ನ ಇತ್ತೀಚಿನ ಅನುವಾದದ ಪ್ರಯತ್ನಗಳು. ನನ್ನ ಅನುವಾದದ ಸಮಯದಲ್ಲಿ ನನ್ನನ್ನು ಮತ್ತೆ ಮತ್ತೆ ಕಾಡಿದ ಪ್ರಶ್ನೆಗಳ ಸಾಲೇ ಇಲ್ಲಿದೆ -- ನನ್ನ ಅನುವಾದ ಓದುವ ಮಕ್ಕಳ ಆಸಕ್ತಿಯನ್ನ ಕೆರಳಿಸುತ್ತದೆಯೇ? ಅದು ಅವರಿಗೆ ಮುದ ನೀಡುತ್ತದೆಯೇ? ನಾನು ಉಪಯೋಗಿಸುವ ಭಾಷೆ ಸರಳವೂ ಮತ್ತು ಸುಂದರವಾಗಿದೆಯೇ? ನಾನು ಹೇಳುತ್ತಿರುವ ವಿಷಯ ಅನುವಾದದಲ್ಲಿ ತನ್ನ ಸೊಗಡನ್ನು ಕಳೆದುಕೊಳ್ಳುತ್ತಿದೆಯೆ ? ನಾನು ತಲುಪಲು ಪ್ರಯತ್ನಿಸುತ್ತಿರುವ ವರ್ಗದ ವಸ್ತು ಸ್ಥಿತಿಯ ಅರಿವು ನನಗಿದೆಯೆ ? ನಾನು ಅನುವಾದ ಮಾಡಲು ಪ್ರಯತ್ನಿಸುತ್ತಿರುವ ವಿಷಯ/ಕತೆ  ನನ್ನ ಭಾಷೆಯ ಅಥವಾ ಸಂಸ್ಕೃತಿಯ ಮಕ್ಕಳಿಗೆ ಹತ್ತಿರವಾಗಬಲ್ಲದೆ ?

ಅನುವಾದಕರು ತಮ್ಮ ಭಾಷೆಯಲ್ಲಿ ಒಂದು ವಿಷಯಕ್ಕೆ ಜೀವ ನೀಡುತ್ತಿರುತ್ತಾರೆ. ಅದು ಅನುವಾದ ಎನ್ನುವುದಕ್ಕಿಂತ ಹೆಚ್ಚಾಗಿ ಅದರ ಉದ್ದೇಶ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ . ನಾವು ಮಾಡುವ ಈ ಅನುವಾದಗಳು/ ಕತೆಗಳು/ವಿಷಯಗಳು ಮಕ್ಕಳ ಮನಸ್ಸನ್ನು ಅರಳಿಸ ಬೇಕೆಂದಿದ್ದಲ್ಲಿ ಕಾರಂತರು ಮತ್ತು ತೇಜಸ್ವಿ ಅವರಿಗಿದ್ದ ಆ ಪ್ರೀತಿ ಮತ್ತು ಕಾಳಜಿಯನ್ನ ರೂಢಿಸಿಕೊಳ್ಳಬೇಕಿದೆ.   ಮೇಲಿನ ಎಲ್ಲ ಪ್ರಶ್ನೆಗಳಿಗೂ ಕೂಡಲೇ ಉತ್ತರ ಸಿಗದೇ ಹೋಗಬಹುದು. ಆದರೆ, ನಮ್ಮಲ್ಲಿನ ಆಶಯ ಮತ್ತು ಪ್ರೀತಿ ಹೇಗೋ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತದೆ.

 

Be the first to comment.

Written by Hema, Editor- Kannada, Pratham Books

Who says math formulas are boring? Do you know how to recite a math concept through a wonderful story? Do you remember some funny things when your first teeth fell off? Have you ever witnessed a sunshower song? Who is Ahilyabai Holkar? On Kannada Rajyotsava, here are some amazing stories for you and your children. Read on to know more… 

ಆಡಾಡಿಕೊಂಡು ಕಲಿ, ಕೇಳು ಕೇಳುತ್ತಲೇ ತಿಳಿ 

1. Pishi and me - ನಾನು, ನನ್ನತ್ತೆ (Level 2)

https://storyweaver.org.in/stories/44731-naanu-nannatte

ಆಹ್, ಅತ್ತೆ ಎಷ್ಟು ಚೆಂದ. ನಾನು ಚಿಕ್ಕವಳಿದ್ದಾಗ ನನ್ನ ಚಿಕ್ಕತ್ತೆ ಹೈಸ್ಕೂಲಿನಲ್ಲಿ ಓದುತ್ತಿದ್ದರು. ನನ್ನ ಬಾಲ್ಯದ ನೆನಪುಗಳಲ್ಲಿ  ನನಗೆ ತುಂಬಾ ನೆನೆಪಿರುವ ಸಂಗತಿಗಳು ಎಂದರೆ ಅತ್ತೆಯ ಜೊತೆ ಊರಿನ ಬೀದಿಗಳಲ್ಲಿ ತಿರುಗಿದ್ದು ಮತ್ತು ಬೇರೆ ಬೇರೆ ಜನರನ್ನು ಭೇಟಿಯಾಗಿದ್ದು.  

ನಾನು, ನನ್ನತ್ತೆ ಕತೆಯ ಒಂದು ಚಿತ್ರ

ನನ್ನ ಸ್ನಾತಕೋತ್ತರ ಪದವಿ ಮುಗಿಯುತ್ತಿದ್ದಂತೆ ನಾನು ಅತ್ತೆಯಾದೆ ಅಂದರೆ ಅಣ್ಣನಿಗೆ ಮಗುವಾಯಿತು. ನನಗೇ ಇನ್ನೂ ಅತ್ತೆಯ ಜೊತೆಗಿನ ನೆನಪುಗಳು ನಿನ್ನೆ ಮೊನ್ನೆ ಎನ್ನುವ ಹಾಗಿದ್ದಾಗ ನಾನು ಅತ್ತೆಯಾಗಿದ್ದೆ. ಎಷ್ಚು ಚೆಂದದ ಭಾವ. ಅಣ್ಣನ ಮಗಳು ನನ್ನ ಜೊತೆ ಬರುವಾಗಲೆಲ್ಲ, ನಾನು ಅತ್ತೆಯ ಜೊತೆ ಹೋಗುವಾಗ ಮಾಡುತ್ತಿದ್ದ ಕೀಟಲೆಗಳನ್ನೇ ಮಾಡುತ್ತಿದ್ದಳು.   ಇಡೀ ಕಥೆ ಮೂರು ತಲೆಮಾರುಗಳನ್ನು ಪ್ರತಿನಿಧಿಸುತ್ತದೆ ಎನ್ನುವುದೇ ನನಗೆ ಸೋಜಿಗ ಮೂಡಿಸುತ್ತದೆ. ಅದಕ್ಕಾಗಿ ನಾವು ಮೂವರೂ ‘ನಾನು, ನನ್ನತ್ತೆ’ ಕಥೆಯನ್ನು ಪದೇ ಪದೇ ಓದುತ್ತೇವೆ. 

2. The Very Wiggly Tooth - ನಿಲ್ಲದ, ಬೀಳದ ಈ ಹಲ್ಲು! (Level 2)

https://storyweaver.org.in/stories/27656-nillada-beelada-ee-hallu

ಮನುಷ್ಯನಿಗೆ ಎರಡು ಹಂತದಲ್ಲಿ ಹಲ್ಲುಗಳು ಬರುತ್ತವೆ. ಮೊದಲನೆಯದು, ಎಳೆ ಹಲ್ಲು (ಹಾಲು ಹಲ್ಲು ಅಂತಾರೆ). ಇದು ಮಗುವಿನಲ್ಲಿ ಶುರುವಾಗಿ ಏಳೆಂಟು ವರ್ಷಗಳ ಹೊತ್ತಿಗೆ ಬಿದ್ದು ಹೋಗುತ್ತವೆ. ಹೀಗೆ ಬಿದ್ದ ಹಲ್ಲಿನ ಜಾಗದಲ್ಲಿ ಮೂಡುವ ಹಲ್ಲುಗಳನ್ನು ಶಾಶ್ವತ ಹಲ್ಲುಗಳೆನ್ನುತ್ತಾರೆ ಎನ್ನುತ್ತದೆ ವಿಜ್ಞಾನ. 

ಮಕ್ಕಳಿಗೆ ಮೊದಲು ಮೂಡುವುದು ಮುಂದಿನ ಮೇಲಿನ ಅಥವಾ ಕೆಳಗಿನ ಎರಡು ಹಲ್ಲುಗಳು. ಆ ಹಲ್ಲುಗಳೇ ಮಕ್ಕಳ ಮೊದಲ ಆಯುಧಗಳು ಎಂದರೂ ಅಡ್ಡಿಯಿಲ್ಲ. ಸ್ವಲ್ಪ ಚಂಡಿ ಹಿಡಿಯುವ ಮಕ್ಕಳಾದರೆ ಅವರ ಮೊದಲ ಕೆಲಸ ಸಿಕ್ಕಿದ್ದನ್ನೆಲ್ಲ ಕಚ್ಚುವುದು. ಹಾಲು ಹಲ್ಲುಗಳು ಬರುವುದು ನಿಂತ ಸ್ವಲ್ಪ ತಿಂಗಳುಗಳಿಗೆ ಅವು ಬೀಳುವ ಸುಗ್ಗಿ ಕೇಳಬೇಕೆ? ಪ್ರತಿ ಮಕ್ಕಳ ಹಾಲು ಹಲ್ಲು ಬೀಳುವುದು ಒಂದೊಂದು ಕಥೆ. ಅಂಥದ್ದೇ ಒಂದು ಕಥೆ ಇಲ್ಲಿ ಓದಲು ಸಿಗುತ್ತದೆ.

3. The Sunshower Song - ಬಿಸಿಲು ಮಳೆಯ ಹಾಡು (Level 3)

https://storyweaver.org.in/stories/41509-bisilu-maleya-haadu

ಜನರ ಮದುವೆಗಳಲ್ಲಿ ಆರ್ಕೆಸ್ಟ್ರಾ ನಡೆಸುವುದು ಸಾಮಾನ್ಯ ಸಂಗತಿ. ಅದೇ ರೀತಿ ಪ್ರಾಣಿಗಳ ಮದುವೆಯಲ್ಲೂ ಒಂದು ಸಂಗೀತ ಕಛೇರಿ ನಡೆಯುತ್ತದೆ. ಅದು ನರಿ ಜೋಡಿ ಮದುವೆ. ಆ ಮದುವೆಯಲ್ಲಿ ಸಂಗೀತದ ಮೋಡಿ. ಉಡುಗೊರೆ ಬದಲಿಗೆ ಅತಿಥಿಗಳೆಲ್ಲ ಶಬ್ದದ ಒಂದೊಂದು ತುಣುಕಿನೊಂದಿಗೆ ಮದುವೆಗೆ ಬರುತ್ತಾರೆ ಎನ್ನುವುದು ಎಷ್ಟು ಸುಂದರವಾದ ಕಲ್ಪನೆ. ಕೆಲವರು ತಾಳ, ಕೆಲವರು ಸ್ವರ ತರುವುದರ ಮೂಲಕ ಮದುವೆ ಭಾವಗೀತೆಯ ಮೇಳವಾಗುತ್ತದೆ. 

ಅಪ್ಪ ಅಮ್ಮನ ಮದುವೆಯ ಬಗ್ಗೆ ತಿಳಿದುಕೊಳ್ಳುವುದು ಬಹುತೇಕ ಮಕ್ಕಳಿಗೆ ಬಲು ಮೋಜಿನ ಸಂಗತಿ. ಮಕ್ಕಳಲ್ಲಿ ಇರುವಂತಹ ಕುತೂಹಲವೇ ಪ್ರಾಣಿಗಳಲ್ಲೂ ಇದೆ ಎನ್ನುವ ಯೋಚನೆಯೇ ಖುಷಿ ಕೊಡುವ ಸಂಗತಿ. ಮಳೆಗಾಲದ ಒಂದು ದಿನ ಸೂರ್ಯ ಇಣುಕಿದರೆ, ಸದ್ಯದಲ್ಲೇ ಏನಾಗಲಿದೆ ಎಂದು ಕಾಡಿನ ಪ್ರಾಣಿಗಳಿಗೆ ತಿಳಿಯುತ್ತದೆ. ಆದರೆ ಈ ಬಿಸಿಲು ಮಳೆಯ ಹಾಡಿನ ಜನಪ್ರಿಯ ದಂತಕತೆ ಸೃಷ್ಟಿಯಾಗಿದ್ದು ಹೇಗೆ ಅಂತ ನಿಮಗೇನಾದರೂ ಗೊತ್ತಾ?

4. Neelumbera on a Full Moon Night - ಬೆಳದಿಂಗಳ ಹೂ ನೀಲಂಬರ (Level 3)

https://storyweaver.org.in/stories/39012-beladingala-hoo-neelambara

ದಿನ ಮಾಡುವ ಕೆಲಸಗಳಿಂದಲೇ ಗಣಿತ ಕಲಿಯುವುದು. ಬೆಳೆಯುವ, ಕರಗುವ ಚಂದ್ರನನ್ನು ಗಮನಿಸುತ್ತ ಗಣಿತ ಮತ್ತು ಲ.ಸಾ.ಅ, ಮ.ಸಾ.ಅ ಕಲಿಯುವುದು ಎಷ್ಟು ಮೋಜಿನ ಕಲಿಕೆಯಲ್ಲವೇ? ಎಲ್ಲ ತರಗತಿಗಳಲ್ಲೂ ಗಣಿತ ಕಬ್ಬಿಣದ ಕಡಲೆ ಎಂದು ಅರಿವಾದಗಲೆಲ್ಲ ನಾನು ಅಂದುಕೊಂಡಿದ್ದು ಚಿತ್ರ ಮತ್ತು ಕತೆಯ ಮೂಲಕ ಗಣಿತ ಕಲಿಯುವುದಾದರೆ ಎಷ್ಟು ಚೆಂದ ಎಂತಲೇ. ಅದಕ್ಕೆ ಪೂರಕ ಎನ್ನುವಂತೆ ಬಂದ ಈ ಕತೆಯನ್ನು ಹಲವು ಸಲ ಗಣಿತದ ಮೋಜಿಗಾಗಿ ಓದಿದ್ದರೆ, ಹಲವು ಸಲ ಚಿತ್ರ ನೋಡುವುದಕ್ಕಾಗಿ ಓದಿದ್ದೇನೆ. 

ಬೆಳದಿಂಗಳ ಹೂ ನೀಲಂಬರ ಕತೆಯ ಒಂದು ಚಿತ್ರ

5. Ahilyabai Holkar - ಅಹಿಲ್ಯಾಬಾಯಿ ಹೋಳ್ಕರ್ (Level 4)

https://storyweaver.org.in/stories/29624-ahilyabai-holkar

ಭಾರತದ ಇತಿಹಾಸದಲ್ಲಿ ನಾವು ಕೇಳುವ ಬಹು ಮುಖ್ಯವಾದ ಹೆಣ್ಣುಮಕ್ಕಳ ಹೆಸರೆಂದರೆ, ಝಾನ್ಸಿಯ ರಾಣಿ ಲಕ್ಷ್ಮೀ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮ. ಇಷ್ಟೇ ಪ್ರಮುಖವಾದ ಇನ್ನೊಂದು ಹೆಸರಿದೆ ಎಂದು ಗೊತ್ತಾಗುವುದು ಅಹಿಲ್ಯಾಬಾಯಿ ಹೋಳ್ಕರ್ ಕಥೆಯಿಂದ. ಅಖಂಡ 28 ವರ್ಷ ಅಹಿಲ್ಯಾಬಾಯಿ ಹೋಳ್ಕರ್ ಮಾಳ್ವ ರಾಜ್ಯವನ್ನು ಆಳಿದ ಕಾಲ ಇತಿಹಾಸದಲ್ಲಿ ಅಜರಾಮರವಾಗಿದೆ. ಅವಳ ಪ್ರಜಾಪ್ರೀತಿ ಇವತ್ತಿಗೂ ಅನುಕರಣೀಯ.
ಅವಳು ತನ್ನ ಪ್ರಜೆಗಳನ್ನು ಎಷ್ಟು ಚೆನ್ನಾಗಿ ನೋಡಿಕೊಂಡಿದ್ದಳೆಂದರೆ ಆಕೆಯನ್ನು ಪುಣ್ಯಶ್ಲೋಕ ಅಹಿಲ್ಯಾಬಾಯಿ ಎಂದು ಕರೆಯುತ್ತಿದ್ದರು. ಅಂದರೆ, ಯಾವುದೇ ಲೋಪಗಳಿಲ್ಲದವಳು ಎಂದು ಅರ್ಥ. ತಮ್ಮ ‘ಡಿಸ್ಕವರಿ ಆಫ್ ಇಂಡಿಯ’ ಪುಸ್ತಕದಲ್ಲಿ ಪಂಡಿತ್ ಜವಹರ್‌ಲಾಲ್ ನೆಹರು ಅವರು, “ಅಹಿಲ್ಯಾಬಾಯಿಯ ರಾಜ್ಯಾಡಳಿತ ಕಾಲವು ಪ್ರಜೆಗಳಿಗೆ ಅತ್ಯಂತ ಸುಭಿಕ್ಷಾ ಕಾಲವಾಗಿತ್ತು. ಅಹಿಲ್ಯಾಬಾಯಿ ಅತ್ಯಂತ ದಕ್ಷ ಮತ್ತು ಸಮರ್ಥ ನಾಯಕಿ, ಸಂಘಟನಾ ಚತುರೆ ಆಗಿದ್ದಷ್ಟೇ ಅಲ್ಲದೇ ಅವಳ ಮರಣಾ ನಂತರ ಜನರು ಅವಳೊಬ್ಬ ದೇವತೆ ಎಂತಲೂ ಗೌರವಿಸತೊಡಗಿದರು,” ಎಂದು ಬರೆದಿದ್ದಾರೆ.


Do join the conversation by leaving your thoughts in the comments section below. You can also reach out to us through our social media channels: FacebookTwitter and Instagram.

Be the first to comment.

Rajesh Khar, Editor (Pratham Books), writes about the journey of a special set of books created last year. 

उत्तरप्रदेश के एक गाँव में एक स्कूल में बहुत सारे बच्चे एक कहानी बुनने में मग्न थे। वे कई सारे रंग बिरंगे चित्रों के इर्दगिर्द बैठे थे और इस कदर व्यस्त थे कि उन्हें शिक्षिका के कक्षा में होने का आभास भी नहीं हो रहा था। आखिरकार कुछ देर बाद एक बच्ची ने अपनी कहानी बुन ही ली और ख़ुशी से उछलने लगी। थोड़ी देर में एक एक करके बाकी सब ने भी अपनी कहानियाँ बना लीं। अब शिक्षिका का ध्यान आया और सब के सब उनकी और दौड़े। दीदी की आँखें चमक उठीं। इतने सारे बच्चों ने इतनी सारी कहानियाँ जो बुन ली थीं। उनको बड़ा अच्छा लग रहा था कि कहाँ तो ये बच्चे लिखने के नाम परकतराते थे और दो-चार लाईनें लिख कर हाथ खड़े देते थे, वहीं आज बिना किसी चूं चां के उन्होंने कहानी लिख ली थी। दीदी ने वो सारी कहानियाँ पढ़ीं, उनमें गलतियाँ तो थीं और कुछ में तो वाक्यों के बीच विराम चिन्ह भी नहीं थे लेकिन ये सभी कहानियाँ उन बच्चों की अपनी कहानियाँ थीं। सब के अपने शब्द, अपने वाक्य, अपने अनुभव और अपने संसार थे। पहली बार इसका अहसास हुआ था उन सब को।

यह एक स्कूल की कहानी नहीं थी, कई राज्यों के बहुत सारे स्कूलों के बच्चे पहली बार अपनी मनपसंद चित्रों पर अपनी कहानियाँ लिख रहे थे और इतनी सारी नयी कहानियाँ बुनी जा रही थीं। इन हज़ारों बच्चों के शिक्षक ख़ुश हो रहे थे और दूर दिल्ली में बैठे हुए कुछ लोग जिन्होंने बड़ी मेहनत करके सिर्फ़ थोड़े ही समय में ५५ नयी किताबें तैयार की थीं, उन्हें स्कूलों तक पहुँचाया था और टीचर्स को प्रशिक्षित भी किया था।

अप्रैल २०१५ के पहले सप्ताह में प्रथम के दिल्ली वाले दफ़्तर में रुक्मिणी बैनर्जी के कमरे में उनके कुछ सहकर्मी और प्रथम बुक्स के कुछ कर्मी आपस में गहन विचार कर रहे थे कि अब की बार बच्चों को कैसी नयी पुस्तकें दी जाएं ताकि उनके पढ़ने-लिखने का शुरुआती सफ़र आसान और मज़ेदार हो पाए। प्रथम ने बहुत सालों बाद फिर से पुस्तकालयों को सुदृढ़ बनाने की सोची थी। रुक्मिणी चाहती थीं कि नया सत्र शुरू होने तक बच्चों के पास पढ़ने को और उन्हें शब्दों की और आकर्षित करने को कुछ अच्छी सामग्री पहुँच जाये। उन्होंने ही इस चक्र को गति दी और फिर उनके कहने पर न केवल प्रथम के लोग बल्कि प्रथम बुक्स के संपादक समूह के लोग एक जुट होकर उन किताबों को तैयार करने लग गए। कैसी किताबें? उनमें क्या होगा और किस प्रकार की होंगी यह सब तो तय ही हो रहा था। केवल इतना तय था की कम से कम ५० और हिन्दी भाषा में होंगी।

प्रथम बुक्स में मनीषा चौधरी और उनके सहकर्मी जुट गए अलग अलग प्रकार की कहानियाँ तय करने में और उन सब को ऐसे प्रारूपों में ढालने में कि बच्चों को पसंद भी आएं और उनको पढ़ने-लिखने की प्रक्रिया की ओर प्रेरित भी कर सके। पूरे अप्रैल और मई के महीनों में किताबें बनाने की प्रक्रिया चलती रही। प्रथम बुक्स ने कुछ ही समय पहले अपने नए नवेले स्टोरीवीवर प्लेटफार्म पर चित्रकारों के लिए एक प्रतियोगिता आयोजित की थी जिसमें ६५ से ज़्यादा चित्रकारों ने सिर्फ़ ६ चित्रों में अपनी अपनी कहानी भेजी थी। मनीषा और उनकी टीम को बिना शब्दों वाली पुस्तकें तैयार करने की सामग्री मिल गयी थी। उन्होंने २० ऐसे प्रारूप तैयार किये और साथ ही साथ ओडिशा की ४ जनजातीय भाषाओँ में तैयार की गयी किताबों में से भी कुछ को चुना गया। प्रथम समूह के साथ अनगिनत बैठकों में तैयार सामग्री पर चर्चा होती रही और फिर आख़िरकार एक एक करके किताबें चुनी जाने लगीं। फिर शुरू हुआ उनको डिज़ाइन करके हर तरह से प्रकाशन के योग्य बनाने का काम। यूँ तो इस काम के सभी चरणों को पार करने में कई  समय लग जाता है पर इस बार तो समय जैसे था ही नहीं। कड़ी मेहनत से सब ने मिलकर सभी किताबों को तैयार किया, उनको छपने भेजा और जून से पुस्तकें छप कर आनी शुरू हो गईं।

फिर शुरू हुआ उन्हें १० हज़ार से ज़्यादा स्कूलों तक किताबें उनकी ज़रुरत और बच्चों के पठन स्तर के अनुसार और प्रथम के कार्यक्रम के अनुसार! इतनी जगहों तक किताबें भेजने का काम बहुत बड़ा था और वेयरहाउस के लोगों ने दिन रात लगा कर लगभग एक महीने में किताबें वहाँ वहाँ पहुंचाईं जहाँ उनको पहुँचना था।

छुट्टियों से लौटे बच्चों को इतना बढ़िया तोहफ़ा मिलेगा, उनको उम्मीद भी नहीं थी। उनके शिक्षकों में से कुछ को और प्रथमके अपने लोगों को उन सब किताबों और कार्डों को बच्चों के साथ प्रयोग का प्रशिक्षण भी मिल चूका था। सब कुछ युद्ध स्तरपर किया गया था। तो क्या आश्चर्य की बात थी कि सभी इतने खुश थे! बच्चों ने उनका क्या इस्तेमाल किया और किस तरह इस सामग्री का असर पढ़ने-लिखने में हो रहा था, इस सबका अध्ययन भी किया जा रहा है। प्रथम की टीमें धीरे धीरे इस कार्यक्रम सभी पहलुओं पर अपना ध्यान केंद्रित कर रहे हैं।

स्कूलों में शिक्षक मज़े से बच्चों द्वारा लिखे, कहे जाने वाले अफ़सानों को पढ़-सुन कर ख़ुश हैं, लेकिन अभी भी इस नयी पठन सामग्री का क्या क्या असर हो रहा है, उसे समझने, परखने में समय लगेगा। उससे पहले ही प्रथम और प्रथम बुक्स एक और नया सेट तैयार करना चाहते हैं...देखिये क्या क्या तैयार होगा

जब बच्चों की कलम चली तो फिर चलती रही ! उत्तरप्रदेश के जैतपुर, प्रतिष्ठानपुर के प्राथमिक विद्यालयों की कक्षा २ व् ३ की छात्राओं की कहानियों की एक छवि।

(This post first appeared on the Pratham Books blog, here.)

Be the first to comment.